ಮೂಡುಬಿದಿರೆ ಜ.5: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಜನವರಿ 6 ಹಾಗೂ 7 ರಂದು ಕರ್ನಾಟಕ ಅರೆಭಾಸೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಇದರ ರಂಗ ಪಯಣದ ಪ್ರಸ್ತುತಿ ನಡೆಯಲಿದೆ.
ವಿದ್ಯಾಗಿರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ 2 ದಿನಗಳ ಕಾಲ ಅರೆಭಾಷೆ ಕನ್ನಡ ನಾಟಕ ‘ಸಾಹೇಬ್ರು ಬಂದವೇ’ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಮೂಲ ಕಥೆ ನಿಕೋಲಾಯ್ ಗೋಗಲ್ ದಿ ಇನ್ಸ್ಪೆಕ್ಟರ್ ಜನರಲ್ ಆಗಿದ್ದು ಕನ್ನಡಕ್ಕೆ ಕೆ.ವಿ ಸುಬ್ಬಣ್ಣ ಕೆ.ವಿ ಅಕ್ಷರ ಅವರು ಅನುವಾದಿಸಿದ್ದಾರೆ. ಜಯಪ್ರಕಾಶ್ ಕುಕ್ಕೇಟಿಯವರು ಅರೆಭಾಷೆಗೆ ಅನುವಾದಿಸಿದ್ದಾರೆ. ಜೀವನ್ ರಾಂ ಸುಳ್ಯ ಸಾಹೇಬ್ರು ಬಂದವೇ ನಾಟಕದ ನಿರ್ದೇಶನ ಮಾಡಿದ್ದಾರೆ.