“ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆಯ ಗುರಿ ರೈತನನ್ನು ಉತ್ಪಾದಕರಾಗಿ ಮಾಡುವುದು ಮಾತ್ರವಲ್ಲ, ಅವರನ್ನು ಉದ್ಯಮಿಗಳನ್ನಾಗಿ ಮಾಡುವಂತಾಗಬೇಕು” ಎಂದು ಪ್ರಧಾನಿ ಮೋದಿ ಹೇಳಿದರು. ರೈತರು ಮತ್ತು ಕೃಷಿ ಒಂದು ಉದ್ಯಮದ ರೂಪದಲ್ಲಿ ಮುಂದೆ ಸಾಗಿದಾಗ, ಹಳ್ಳಿಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಮತ್ತು ಸ್ವ-ಉದ್ಯೋಗಾವಕಾಶಗಳು ಬರುತ್ತವೆ ಎಂದು ಅವರು ಹೇಳಿದರು.
ಬುಂದೇಲ್ಖಂಡ್ ಪ್ರದೇಶದ ಪ್ರಮುಖ ಸಂಸ್ಥೆಯಾದ ಝಾನ್ಸಿ ಮೂಲದ ರಾಣಿ ಲಕ್ಷ್ಮಿ ಬಾಯಿ ಕೇಂದ್ರ ಕೃಷಿ ವಿಶ್ವವಿದ್ಯಾಲಯದ ಕಾಲೇಜು ಮತ್ತು ಆಡಳಿತ ಕಟ್ಟಡಗಳನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಉದ್ಘಾಟಿಸಿ ಮಾತನಾಡಿದರು. ಕೃಷಿಯಲ್ಲಿ ‘ಸ್ವಾವಲಂಬನೆ’ ಕೇವಲ ಆಹಾರ ಧಾನ್ಯಗಳಲ್ಲಿನ ಸ್ವಾವಲಂಬನೆಗೆ ಸೀಮಿತವಾಗಿಲ್ಲ, ಆದರೆ ಈ ಪರಿಕಲ್ಪನೆಯು ಗ್ರಾಮದ ಸಂಪೂರ್ಣ ಆರ್ಥಿಕತೆಯ ಸ್ವಾವಲಂಬನೆಯನ್ನು ಒಳಗೊಂಡಿದೆ ಎಂದು ಮೋದಿ ಇದೇ ವೇಳೆ ಹೇಳಿದರು.
ಉದ್ಘಾಟನೆಯ ಬಳಿಕ, ಪ್ರಧಾನಿಯು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು ಮತ್ತು ಖಾದ್ಯ ತೈಲಗಳ ಆಮದನ್ನು ಕಡಿಮೆ ಮಾಡುವುದು ಮತ್ತು ಆಹಾರ ಸಂಸ್ಕರಣೆಯನ್ನು ಹೆಚ್ಚಿಸುವುದು, ವಿಶೇಷವಾಗಿ ಹಣ್ಣುಗಳು ಮತ್ತು ತರಕಾರಿಗಳ ಸಂಸ್ಕರಣೆಯಲ್ಲಿ ಎದುರಾಗುವ ಕೆಲವು ಸವಾಲುಗಳನ್ನು ಎದುರಿಸುವ ಮಾರ್ಗಗಳ ಬಗ್ಗೆ ಕೇಳಿದರು.
ಸಂವಾದದ ಸಮಯದಲ್ಲಿ, ಈ ಪ್ರದೇಶದಲ್ಲಿ ನವೀನ ಮತ್ತು ಕಡಿಮೆ ವೆಚ್ಚದ ತಂತ್ರಜ್ಞಾನದ ಮೂಲಕ ನೀರು ಮತ್ತು ಮಳೆನೀರು ಕೊಯ್ಲು ಮರುಬಳಕೆ ಮಾಡುವುದನ್ನು ಉತ್ತೇಜಿಸಲು ಪ್ರಧಾನಿ ಒತ್ತಿ ಹೇಳಿದರು.